ಟ್ರೂ ಮೀಡಿಯಾ ಮಾ.8:
ನನ್ನ ಊರು ಉಬಾರ್ , ಸ್ವಚ್ಛ್ಉಬಾರ್ ತ್ಯಾಜಮುಕ್ತ ಉಬಾರ್ ಎಂಬ ದ್ಯೇಯ ವಾಕ್ಯದೊಂದಿಗೆ ಇಂದು ಉಪ್ಪಿನಂಗಡಿಯಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು ಮಾರ್ಗದರ್ಶನದಲ್ಲಿ ತ್ಯಾಜ್ಯ ಮುಕ್ತ ಊರು ,ಸ್ವಚ್ಛ್ಸ ಉಪ್ಪಿನಂಗಡಿ ಕನಸಲ್ಲ! ನನಸಾಗಿಸುವ ಬನ್ನಿ !! ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ,ಅದ್ಯಕ್ಷರು ರಾಮಕೃಷ್ಣ ಮಠ ಮಂಗಳೂರು, ಸ್ವಾಮಿ ಏಕಗಮ್ಯಾನಂದ ಜಿ, ರಾಮಕೃಷ್ಣ ಮಠ ಮಂಗಳೂರು, ಉಪಸ್ಥಿತಿಯಲ್ಲಿ ಮಾನ್ಯ ಪುತ್ತೂರು ತಾಲೂಕಿನ ಶಾಸಕರಾದ ಶ್ರಿ ಸಂಜೀವ ಮಠಾಂದೂರ್ ರವರು ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಗಳಾದ ಡಾಕ್. ಸೆಲ್ವಮಣಿ ಅರ್. IAS ,ಪುತ್ತೂರು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂ ದ್ ಹಾಗೂ ತಾಲೂಕು ಪಂಾಯತ್ ಸದಸ್ಯರಾದ ಶ್ರೀಮತಿ ಸುಜಾತ ಕೃಷ್ಣ ರವರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ ವಹಿಸಿಕೊಂಡಿದ್ದರು .
ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲೆಯ ಮಕ್ಕಳು ,ರಾಮಕೃಷ್ಣ ಮಿಷನ್ ಮಂಗಳೂರು ನ ಸದಸ್ಯರು ಹಾಗೂ ಊರಿನ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಊರವರು ಪಾಲ್ಗೊಳ್ಳುವಿಕೆಯಿಂದ ಜಾಥಾ ಕೂಡ ವ್ಯವಸ್ಥಿತವಾಗಿ ನಡೆಯಿತು.
ಜಾಹಿರಾತು