"ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗೆ ಸರಕಾರದೊಂದಿಗೆ ಚರ್ಚಿಸುತ್ತೇನೆ" ಅಂದು ಶಾಫಿ ಸಅದಿಗೆ ಮಾತುಕೊಟ್ಟಿದ್ದ ಕುಮಾರಸ್ವಾಮಿ ಅಧಿಕಾರ ಬಂದಮೇಲೆ ಮರೆತುಬಿಟ್ಟರೆ? - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ನವೆಂಬರ್ 12, 2018

"ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗೆ ಸರಕಾರದೊಂದಿಗೆ ಚರ್ಚಿಸುತ್ತೇನೆ" ಅಂದು ಶಾಫಿ ಸಅದಿಗೆ ಮಾತುಕೊಟ್ಟಿದ್ದ ಕುಮಾರಸ್ವಾಮಿ ಅಧಿಕಾರ ಬಂದಮೇಲೆ ಮರೆತುಬಿಟ್ಟರೆ?

Image result for nasir maadni banglore jail
ಟ್ರೂ ಮೀಡಿಯಾ ನ್ಯೂಸ್,ನ 12
ಅಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಎಸ್ ಇ ಡಿ ಸಿ ಕ್ರಿಸ್ಟಲ್ ಜುಬಿಲಿ ಸಮ್ಮೇಳನದಲ್ಲಿ ಮೈದಾನ ಪೂರ್ತಿಯಾಗಿ ತುಂಬಿಕೊಂಡಿದ್ದ ಜನ ಸಾಗರದ ಮುಂದೆ ಮುಖ್ಯ ಅತಿಥಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ‌ ಅವರು "ನಾಸಿರ್ ಮ'ಅದನಿ ಉಸ್ತಾದರ ಪರವಾಗಿ ಸರಕಾರದೊಂದಿಗೆ ಚರ್ಚಿಸುತ್ತೇನೆ" ಎಂದು ಶಾಫಿ ಸಅದಿಗೆ  ಮಾತುಕೊಟ್ಟಿದ್ದರು.
ಇದಾದ ಮೇಲೆ ಕುಮಾರಸ್ವಾಮಿ ಅವರು ಸರಕಾರದೊಂದಿಗೆ ಈ ವಿಷಯವಾಗಿ ಚರ್ಚಿಸಿದ ವಿಷಯ ಯಾವುದೇ ಮಾಧ್ಯಮಗಳಲ್ಲಿ ಕಾಣಲಿಲ್ಲ. ಆ ಭಾಷಣ ಮುಗಿದ ಮೇಲೆ ಅವರು ಸರಕಾರದೊಂದಿಗೆ ಚರ್ಚಿಸಲು ಮರೆತಿರಲೂಬಹುದು. ಕ್ರಮೇಣ ನಾವು ಕೂಡ ಮರೆತೆವು.
ನಿಜವಾಗಿಯೂ ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗಾಗಿ ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಕುಮಾರಸ್ವಾಮಿ ಅವರಿಗೆ ಇದ್ದುಕೊಂಡೇ ಅಂದು ಈ ರೀತಿ ಮಾತುಕೊಟ್ಟಿದ್ದೇ ಆದರೆ ದಯವಿಟ್ಟು ಈಗ ಶ್ರಮಿಸಬಹುದಲ್ಲವೇ?
ಯಾಕೆಂದರೆ ಇಂದು ಕುಮಾರಸ್ವಾಮಿ ಅವರದ್ದೇ ಸರಕಾರ ಇದೆ, ಆ ಸಮ್ಮೇಳನದಲ್ಲಿ ಮಾಜಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಇಂದು "ಮುಖ್ಯಮಂತ್ರಿ" ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ತಾನು ಕೊಟ್ಟ ಮಾತು ಮತ್ತೆ ನೆನಪಾಗಿ ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗೆ ಶ್ರಮಿಸುತ್ತಾರ.!

 ಎಸ್ಸಾರ್ಜೆ ಮಾಡನ್ನೂರ್

Pages