ಟ್ರೂ ಮೀಡಿಯಾ ನ್ಯೂಸ್: ಅ,31
ಮಂಗಳೂರು : ಅಶೋಕನಗರ ಸಮೀಪದ ದಂಬೇಲ್ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಟ (ಅಂದರ್-ಬಾಹರ್) ಆಡುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಶೋಕ ನಗರ ನಿವಾಸಿ ಮೋಹನ್ ಡಿ.(28), ಕಾರ್ಕಳ ತಾಲೂಕಿನ ಕುಕ್ಕೂಂದೂರು ನಿವಾಸಿ ಸಂದೇಶ್ ಬಾಳಿಗಾ (29), ಬಾಗಲಕೋಟೆಯ ಬಾಲಪ್ಪ ಹೊನ್ನಪ್ಪ ಹೊರಗಿನಮನಿ(27), ಗದಗ ಜಿಲ್ಲೆ ರೋಣ ನಿವಾಸಿ ದುರ್ಗಪ್ಪ ಗುಡಿಮನಿ(29), ತಲಪಾಡಿ ನಿವಾಸಿ ವಿನೋದ್ ಕುಮಾರ್(28), ಕೊಡಿಯಾಲ್ ಬೈಲ್ನ ಪಮ್ಮಿ ಯಾನೆ ಪ್ರವೀಣ್, ಕಾಸರಗೋಡು ಕುಂಬ್ಳೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ (26), ಕಸಬಾ ಬೆಂಗ್ರೆಯ ಯೂಸುಫ್(46), ವಳಚ್ಚಿಲ್ ನಿವಾಸಿ ಇಸ್ಮಾಯೀಲ್ (55) ಬಂಧಿತ ಆರೋಪಿಗಳು.
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ನಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ 30,440 ರೂ. ನಗದು, ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ಗಳು, ಟೇಬಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟ ಆಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

