ನಾಳೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಪ್ಪಿನಂಗಡಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಏಪ್ರಿಲ್ 14, 2025

ನಾಳೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಪ್ಪಿನಂಗಡಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ


ಉಪ್ಪಿನಂಗಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ನಾಳೆ ಏಪ್ರಿಲ್ 15ರಂದು ಉಪ್ಪಿನಂಗಡಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದೆ. ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಈ ಪ್ರತಿಭಟನೆ ಇಂಡಿಯನ್ ಸ್ಕೂಲ್ ವಠಾರ ದಲ್ಲಿ ಸಂಜೆ 3.30ಕ್ಕೆ ಆರಂಭವಾಗಲಿದೆ.


ವಿವಿಧ ಧರ್ಮಗಳ ಹಾಗೂ ಸಮಾಜದ ಪ್ರತಿಷ್ಠಿತ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದ ಜನವಿರೋಧಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ನಿಟ್ಟಿನ ಈ ತಿದ್ದುಪಡಿ ಕಾಯ್ದೆಯ ವಿರೋಧವಾಗಿ ಸಾರ್ವಜನಿಕರು ಒಂದುಗೂಡಿ ಧ್ವನಿ ಎತ್ತುವ ನಿರೀಕ್ಷೆಯಿದೆ.

ಪ್ರಮುಖವಾಗಿ ಭಾಗವಹಿಸುವವರು:

ಅಶೋಕ್ ಕುಮಾರ್ ರೈ(ಮಾನ್ಯ ಶಾಸಕರು ಪುತ್ತೂರು), ಸುಧೀರ್ ಕುಮಾರ್ ಮರೋಳಿ, ಮುನೀರ್ ಕಾಟಿಪಳ್ಳ, ಅನ್ವರ್ ಸಾಧತ್ ಬಜತ್ತುರ್, ಇಸಾಕ್ ಪುತ್ತೂರು, ಡಾ. ಎಮ್ಮೆಸೆಮ್ ಅಬ್ದುರಶೀದ್ ಝೖನಿ‌ ಕಾಮಿಲ್ ಸಖಾಫಿ, ಇಕ್ಬಾಲ್ ಬಾಳಿಲ.


ಈ ಪ್ರತಿಭಟನೆ ಕೇಂದ್ರ ಸರ್ಕಾರದ ವಿರೋಧಾತ್ಮಕ ನೀತಿಗಳನ್ನು ಖಂಡಿಸುವ ನಿಟ್ಟಿನಲ್ಲಿ, ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವೆಂದು ಸಂಘಟಕರು ತಿಳಿಸಿದ್ದಾರೆ

 

Pages